ಗಿರೀಶ್ ಎಸ್ಗಿರಿ-ಶಿಖರ ೫ನೆ ಕ್ಲಾಸ್ ತನಕ ಹಾಸನದಲ್ಲಿ ಓದುತ್ತಿದ್ದ ನನಗೆ ಅನಿವಾರ್ಯ ಕಾರಣಗಳಿಂದಾಗಿ ಮುಂದಿನ ಓದಿಗೆ ಊರಿಗೆ ವಾಪಸ್ ಬರಬೇಕಾಗಿ ಬಂತು.ಅಲ್ಲಿವರೆಗೂ ದೊಡ್ಡಪ್ಪನ ಮನೆಯಲ್ಲಿ ಓದಿಕೊಂಡಿದ್ದ ನಾನು ಊರಿಗೆ ಬರುತ್ತಿದ್ದದ್ದು ದಸರಾ ಮತ್ತು ಬೇಸಿಗೆ ರಜಾಕ್ಕೆ ಮಾತ್ರ,ಮತ್ತೆ ಅದೇ ರಜದಲ್ಲಿ ಅಜ್ಜಿ ಮನೆ,ನೆಂಟರು ಮನೆ ಎಲ್ಲ ಸುತ್ತಾಡದು..ಹೀಗೆ ಹಾಸನದಿಂದ ನಮ್ಮೂರಿಗೆ ಬಂದಾಗ ಹಳ್ಳಿಯ ಯಾವುದೇ ಕೆಲಸಗಳು ನನಗೆ ಬರ್ತಿರಲಿಲ್ಲ..ಆಮೇಲೆ ಒಂದೊಂದಾಗಿ ಕಲಿಯುತ್ತಾ ಹೋದೆ,ದನ ಕಟ್ಟಕ್ಕೂ ಬರ್ತಿರಲಿಲ್ಲ,ನಮ್ಮ ಅಪ್ಪ ಅಮ್ಮ ಅದೆಷ್ಟು ಸಾರಿ ಹೇಳಿಕೊಟ್ಟರು ನಂದು ಅದೇ ಹಣೆ ಬರಹ.ನಾನೇನಾದ್ರು ಹೊಲದಲ್ಲಿ ಹಸು ಕಟ್ಟಿ ಬಂದ್ರೆ ಅದು ಕಿತ್ತ್ಕೊಂಡು ಎಲ್ಲಾದರು ಹೊಗಿರದು,ಕೆಲವೊಮ್ಮೆ ಬೇರೆಯವರ ತೋಟಕ್ಕೆ ಕೂಡ..ಅದೇನ್ ನಾಯಿ ಗಂಟು ಕಟ್ತಾನೆ ಅಂತ ನಮ್ಮಮ್ಮ ಹೆಳವರು.ಕೊನೆಗೂ ದನ ಕಟ್ಟದು ಕಲ್ತಿದ್ದಾಯಿತು.ಹಾಗೆ ಮನೆಗೆಲಸ ತೋಟದ ಕೆಲಸ,ನೀರು ಆಯಿಸುವುದು,ಕಾಯಿ ಕೆಡವುವುದು ಎಲ್ಲ ಕಲಿತೆ.ಅದೇ ಅಲ್ಲದೆ ಎಂದೂ ಆಡಿರದ ಗಿಲ್ಲಿ ದಾಂಡು,ಮರ ಕೋತಿ ಆಟ ಮುಂತಾದ ಹಳ್ಳಿ ಆಟಗಳು ಆಡುತ್ತಿದ್ದದ್ದು ,ಹೀಗೆ ಹಳ್ಳಿ ಜೀವನ ಸಂಪ್ರದಾಯಕ್ಕೆ ಹೊಂದಿಕೊಳ್ಳುತ್ತಿದ್ದೆ. ನಮ್ಮ ಊರಿನವರೇ ಆದರೂ ಎಷ್ಟೋ ಜನ ನಂಗೆ ಗೊತ್ತೇ ಇರಲಿಲ್ಲ,ಸಂಪರ್ಕವೇ ಇರದ ಕಾರಣ.ಮನೆ ಪಕ್ಕದಲ್ಲೇ ನಮ್ಮೂರ ಶಾಲೆ ಇತ್ತಾದರೂ ನಾನು ಹಳೇಬೀಡಿಗೆ ಹೋಗುತ್ತಿದ್ದೆ.ಆದರೆ ಒಬ್ಬೊಬ್ಬರಾಗಿ ಮನೆ ಪಕ್ಕದ ಸ್ಕೂಲಿನ ಮುಂದೆ ಓದಿ…
ಗಂಗಾಧರಯ್ಯ ಪುಸ್ತಕ ಸಂಭ್ರಮ
Gangadharaiah Makalli೨೬-೦೧-೧೨ ರಂದು ಮಾಕುವಳ್ಳಿಯಲ್ಲಿರುವ ನನ್ನ ತೋಟದಲ್ಲಿ ನಡೆದ ಪುಸ್ತಗಳ ಬಿಡುಗಡೆಯ ಸಂಭ್ರಮದ ಘಳಿಗೆಯಲ್ಲಿ…ಕಡಿದಾಳ್ ಶಾಮಣ್ಣ, ದಿನೇಶ್ ಅಮಿನ್ ಮ್ಟಟ್ಟು, ನಟರಾಜ್ ಹುಳಿಯಾರ್, ಬಿ.ಚಂದ್ರೇಗೌಡ, ಬೆಟ್ಟದ ಬುಡದ ನೀಲಮ್ಮಜ್ಜಿ ಮತ್ತು ನಾನು.ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ Share
ಮತ್ತೆ ಬಂತು ‘ಜುಗಾರಿ ಕ್ರಾಸ್’ !
ಸಮುದಾಯ ಬೆಂಗಳೂರು ಪ್ರಸ್ತುತ ಪಡಿಸುವ “ಜುಗಾರಿ ಕ್ರಾಸ್” ನಾಳೆ (28ನೇ ಜನವರಿ) ರಂಗಶಂಕರದಲ್ಲಿ ನಿಮ್ಮ ಮುಂದೆ !ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತವಾದ ಈ ನಾಟಕದ ರಂಗರೂಪ ಮತ್ತು ನಿರ್ದೇಶನ ನಟರಾಜ ಹೊನ್ನವಳ್ಳಿ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಯಶಸ್ಸನ್ನು ಕಂಡು 55 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ನಾಟಕ ಜುಗಾರಿ ಕ್ರಾಸ್.ನೀವೂ ಬನ್ನಿ, ಸ್ನೇಹಿತರನ್ನೂ ಕರೆತನ್ನಿ.ಹೆಚ್ಚಿನ ವಿವರಗಳಿಗೆ 9900182400 ಸಂಖ್ಯೆಯನ್ನು ಸಂಪರ್ಕಿಸಿ.ಸಾಹಿತ್ಯ ಪ್ರಿಯರು, ರಂಗಾಸಕ್ತರಲ್ಲದೇ ಎಲ್ಲರೂ ನೋಡಬಹುದಾದ ನಾಟಕ ಮುಂದೆ ಓದಿ…
‘ಪ್ರೇಮ, ಯುದ್ಧ ಮತ್ತು ಚುನಾವಣೆಯಲ್ಲಿ ಎಲ್ಲವೂ ನ್ಯಾಯವೇ’??
ನಿಲುಮೆ ಕೆಲವೊಬ್ಬರು ಏನು ಮಾಡಿದರೂ ವಿವಾದವಾಗುತ್ತದೆ. ಅವರು ಸೃಜನಶೀಲ ಕ್ಷೇತ್ರದಲ್ಲಿದ್ದರಂತೂ ವಿವಾದ ಇನ್ನಷ್ಟು ತೀವ್ರ. ಕನ್ನಡದ ಮಟ್ಟಿಗೆ ಆ ಕೀರ್ತಿ ಎಸ್.ಎಲ್. ಭೈರಪ್ಪ ಅವರದಾದರೆ, ಭಾರತೀಯ ಇಂಗ್ಲಿಷ್ ಬರಹಗಾರರ ಪೈಕಿ ಆ ಪಟ್ಟ ಸಲ್ಮಾನ್ ರಶ್ದಿಗೆ.ಬಹುಶಃ, ದಿ ಸೆಟನಿಕ್ ವರ್ಸಸ್ ಕೃತಿಯನ್ನು ರಶ್ದಿ ಬರೆಯದೇ ಹೋಗಿದ್ದರೆ, ಅವರ ಪಾಲಿಗೆ ವಿವಾದಗಳಾಗಲಿ, ವಿವಾಹಗಳಾಗಲಿ ಈ ಪರಿ ಇರುತ್ತಿರಲಿಲ್ಲವೇನೋ. ಮುಸ್ಲಿಂ ಮನಃಸ್ಥಿತಿಯನ್ನು ಮಾತ್ರ ಕೆರಳಿಸುವಂಥ ಈ ಪುಸ್ತಕವನ್ನು ಮುಗಿಬಿದ್ದು ಮುಟ್ಟುಗೋಲು ಹಾಕಿಕೊಂಡ ಭಾರತ ಸರ್ಕಾರ, ಮುಂದೆ ಓದಿ…
ಮತ್ತೆ ವಿವೇಕಾನಂದ..
-ಜಲೀಲ್ಪ್ರಜಾವಾಣಿಯಲ್ಲಿ ದಿನೇಶ್ ಅಮೀನ್ ಮಟ್ಟುರವರು ತಮ್ಮ ಅಂಕಣದಲ್ಲಿ ವಿವೇಕಾನಂದರ ಬಗ್ಗೆ ಬರೆದ ‘‘ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು’’ ಎಂಬ ಲೇಖನದ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ನೋಡಿದರೆ ನಮಗೆ ಮನುಷ್ಯರ ಜೊತೆಗೆ ಬದುಕುವುದು ಗೊತ್ತಿಲ್ಲ ಎಂಬುದು ಸಾಬೀತಾಗುತ್ತಿದೆ. ಮನುಷ್ಯರಿದ್ದ ಕಡೆ ಮನುಷ್ಯರ ಬಗ್ಗೆ ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳಿರುತ್ತವೆ. ವಿವೇಕ ಹುಟ್ಟು ವುದು ಅವುಗಳ ನಡುವಿನ ಮಂಥನದಲ್ಲಿ. ಅಂತಿಮದಲ್ಲಿ ಆ ವಿವೇಕದ ಬದುಕೇ ಆನಂದ ವನ್ನು ನೀಡುತ್ತದೆ. ಮನುಷ್ಯರಿಲ್ಲದ ಕೇವಲ ದೇವರು ಮುಂದೆ ಓದಿ…
ಹನುಮನಿದ್ದರೆ ತಿಳಿಸಿ
ನಾನು ಕರ್ನಾಟಕದ ಜನಪದ ಹುನುಮ ಪರಂಪರೆ ಕುರಿತು ಅಧ್ಯಯನ ಕೈಗೊಂಡಿರುವೆ. ನಿಮ್ಮ ಭಾಗದ ಹನುಮನ ವಿಶೇಷ ಕಥೆ, ಸ್ಥಳೀಯ ಮಿತ್, ವಿಶಿಷ್ಠ ಆಚರಣೆ, ಇದ್ದರೆ ತಿಳಿಸಿ, ಸಾದ್ಯವಾದರೆ ಹಾಗೆ ತಿರುಗಾಡುತ್ತಾ ಒಮ್ಮೆ ನಿಮ್ಮ ಊರಿಗೂ ಬರುವೆ. ಅಂದ ಹಾಗೆ ಇದು ಯಾವುದೇ ಯು.ಜಿ.ಸಿ ಯೋಜನೆಯಲ್ಲ, ಯಾವ ಸರಕಾರ/ಅರೆಸರಕಾರಿ ಧನ ಸಹಾಯದಿಂದಲೂ ಮಾಡುತ್ತಿಲ್ಲ.ಇದು ನನ್ನ ವಯಕ್ತಿಕ ಆಸಕ್ತಿಯ ಸಂಶೋಧನೆ. ಹಾಗಾಗಿ ನಿಮ್ಮ ಭಾಗದ, ನಿಮಗೆ ಗಮನಕ್ಕೆ ಬಂದ ಆಂಜನೇಯ/ಹನುಮ/ಮಾರುತಿ ಇನ್ನಾವುದೇ ಹನುಮನಿಗಿರುವ ಮುಂದೆ ಓದಿ…
Categories








